﻿<?xml version="1.0" encoding="utf-8"?>
<rss version="2.0" xmlns:slash="http://purl.org/rss/1.0/modules/slash/" xmlns:trackback="http://madskills.com/public/xml/rss/module/trackback/">
  <channel>
    <title>ಇತ್ತೀಚಿನ ಬರಹಗಳು</title>
    <description>ಬ್ಲಾಗ್</description>
    <link>http://sumneonline.com/main/blog/ಬಲಗ/tabid/108/Default.aspx</link>
    <language>en-US</language>
    <managingEditor>admin@sumneonline.com</managingEditor>
    <webMaster>admin@sumneonline.com</webMaster>
    <pubDate>Fri, 21 Nov 2008 12:07:47 GMT</pubDate>
    <lastBuildDate>Fri, 21 Nov 2008 12:07:47 GMT</lastBuildDate>
    <docs>http://backend.userland.com/rss</docs>
    <generator>Blog RSS Generator Version 3.3.0.33249</generator>
    <item>
      <title>ಮುದ್ದಿನ ಕರು</title>
      <description>ಓ ಕನ್ನಡ ಗೋವಿನ ಮುದ್ದಿನ ಕರು
</description>
      <link>http://sumneonline.com/main/blog/ಬಲಗ/tabid/108/EntryID/138/Default.aspx</link>
      <comments>http://sumneonline.com/main/blog/ಬಲಗ/tabid/108/EntryID/138/Default.aspx#Comments</comments>
      <guid isPermaLink="true">http://sumneonline.com/main/Default.aspx?tabid=108&amp;EntryID=138</guid>
      <pubDate>Tue, 04 Nov 2008 08:35:37 GMT</pubDate>
      <slash:comments>1</slash:comments>
      <trackback:ping>http://sumneonline.com/main/DesktopModules/Blog/Trackback.aspx?id=138</trackback:ping>
    </item>
    <item>
      <title>ಸಂಘಂ ರೇಡಿಯೋ 90.4</title>
      <description>ಭಾರತದ ಮೊಟ್ಟಮೊದಲ ಸಮುದಾಯ ರೇಡಿಯೋ ಆಗಿ ಅಂದ್ರಪ್ರದೇಶದ "ಸಂಘಂ ರೇಡಿಯೋ" (ಸಂಘದ ರೇಡಿಯೋ) 90.4 ತರಂಗಗಳಲ್ಲಿ ಅಕ್ಟೋಬರ್ 15 ರಂದು ಪ್ರಾರಂಭವಾಯಿತು. ಇದು ಇರುವುದು ಅಂದ್ರಪ್ರದೇಶದ ಮೆದಕ್ ಜಿಲ್ಲೆಯ, ಜಹೀರಾಬಾದ್ ತಾಲ್ಲೂಕಿಗೆ ಸೇರಿದ ಪಸ್ತಾಪುರ್ ಹತ್ತಿರದ ಮಾಚನೂರು ಗ್ರಾಮದಲ್ಲಿ. ಇಲ್ಲಿಂದ ಸುಮಾರು 30 ಕಿ.ಮೀ ದೂರ ಹೋದರೆ ನಮ್ಮ ಕರ್ನಾಟಕದ ಬೀದರ್ ಸಿಗುತ್ತದೆ. ಮಾಚನೂರು ತಲುಪಲು ಅಂದ್ರಪ್ರದೇಶದ ರಾಜಧಾನಿಯಾದ ಹೈದರಾಬಾದ್ ನಿಂದ 3 ಘಂಟೆಗಳ ಕಾಲ ಬಸ್ ಪ್ರಯಾಣ ಮಾಡಬೇಕು ಅಥವಾ ಬೀದರ್ ನಿಂದ ಬರಬಹುದು. ಈ ಸಂಘಂ ರೇಡಿಯೋವನ್ನು ನಿರ್ವಹಿಸುತ್ತಿರುವವರು ದಲಿತ ಕುಟುಂಬದಿಂದ ಬಂದ ಇಬ್ಬರು ಹೆಣ್ಣುಮಕ್ಕಳು ಇವರು ಹೆಚ್ಚಾಗಿ ಸಹ ಓದಿಲ್ಲ ಕೇವಲ 10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಮಾಡಿದ್ದು ಸುಮಾರು ವರ್ಷಗಳಿಂದ ಇಲ್ಲಿಯೇ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಇಲ್ಲಿಯ ಕಾರ್ಯಕ್ರಮಗಳು ಗ್ರಾಮೀಣ ರೀತಿಯಲ್ಲಿ ಇರುತ್ತದೆ. ಯಾವುದೇ ಸಂಗೀತ ಇಲ್ಲ, ಯಾವುದೇ ಚಲನ ಚಿತ್ರಗೀತೆ ಇಲ್ಲ, ಬದಲಾಗಿ ಪೂರ್ತಿಯಾಗಿ ಸ್ಥಳೀಯ ಜನರು ಹಾಡಿದ ಹಾಡುಗಳು, ಸಾವಯವ ಕೃಷಿ ಬಗ್ಗೆ, ಆರೋಗ್ಯದ ಬಗ್ಗೆ, ಹಬ್ಬಗಳ ಬಗ್ಗೆ, ಮತ್ತು ಆ ಭಾಗದಲ್ಲಿ ಹರಿಕಥೆಯಂತೆ ಹಾಡುವ ಕಲಾವಿದರಿಂದ ಹಾಡುಗಾರಿಗೆ ಮತ್ತು ಕಥೆ ಹೇಳುವುದು ಇತ್ಯಾದಿಗಳು.&lt;BR /&gt;ಇದರ ಜೊತೆಗೆ ಇವರು ವಿಡಿಯೋ ಸಹ ಮಾಡುತ್ತಿದ್ದಾರೆ. ಇದನ್ನು ಮಾಡುವವರು ಸಹ ಮಹಿಳೆಯರು ಇವರು ಸಹ 10 ರತನಕ ಸಹ ಓದಿಲ್ಲ ಇವರು ವಿಡಿಯೋ ಕ್ಯಾಮರ ಕೈಲ್ಲಿ ಹಿಡಿದರೆ ಯಾವ ಟಿ.ವಿ ರಿಪೋರ್ಟರ್ ಆಗಲಿ ಅಥವಾ ವಿಡಿಯೋ ಗ್ರಾಪರ್ ಆಗಲಿ ಸಹ ಇವರ ಹತ್ತಿರ ಅಷ್ಟಕ್ಕೆ ಅಷ್ಟೆ.&lt;BR /&gt;ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಡೆಕ್ಕನ್ ಡೆವಲಪ್ ಮೆಂಟ್ ಸೊಸೈಟಿ (ಡಿ.ಡಿ.ಎಸ್) ಯ ಹೆಸರಿಗೆ ಪರವಾನಗಿ ಸಿಕ್ಕಿದೆ. ಡಿ.ಡಿ.ಎಸ್ ಸಂಸ್ಥೆಯು ಈ ಭಾಗದಲ್ಲಿ ದಲಿತ ಮಹಿಳೆಯರೊಟ್ಟಿಗೆ ಹೆಚ್ಚು ಕೆಲಸಗಳನ್ನು ಮಾಡುತ್ತಿದ್ದು, ದಲಿತರ 100 ಮಹಿಳಾ ಸ್ವಸಾಯ ಸಂಘಗಳನ್ನು ಹುಟ್ಟು ಹಾಕಿದೆ. ಈ ಸಂಘಗಳಲ್ಲಿ ಸುಮಾರು 4000 ಸದಸ್ಯರಿದ್ದು, 75 ಗ್ರಾಮಗಳಲ್ಲಿ ಸಂಘಗಳು ಇವೆ. ಈ ಭಾಗದ ಜನ ಈಗಲೂ ರೂ.10 ರಿಂದ 15 ರೂಗಳಿಗೆ ಕೂಲಿಯನ್ನು ಮಾಡಿ ಜೀವನವನ್ನು ಸಾಗಿಸುತ್ತಿದ್ದಾರೆ. ಇಂತಹ ಜನರ ಏಳಿಗೆಗಾಗಿ ಸಂಘಂ ರೇಡಿಯೋ (ಸಂಘದ ರೇಡಿಯೋ) ಉತ್ತಮ ಕೆಲಸಗಳನ್ನು ಮಾಡಲು ಹೊರಟಿದೆ. ಒಟ್ಟಾರೆ ನಮ್ಮ ದೇಶದಲ್ಲಿ ಇತ್ತೀಚಿಗೆ ತಾನೇ ಸಮುದಾಯ ರೇಡಿಯೋಗಳಿಗೆ ಪರವಾನಗಿ ನೀಡಲು ಮುಂದಾಗಿದೆ. ಹೇಳಬೇಕೆಂದರೆ ನಮ್ಮ ದೇಶದಲ್ಲಿ ಈ ತರಹದ ಸಮುದಾಯ ರೇಡಿಯೋಗಳು ಹೆಚ್ಚು ಹೆಚ್ಚು ಪ್ರಾರಂಭವಾಗಬೇಕು. ಆಗ ಮಾತ್ರ ಸರ್ಕಾರದ ಈ ಯೋಜನೆ ಸ್ವಲ್ಪ ಕಾಲ ಇರಲು ಸಾಧ್ಯ. ಇದೆ ತಿಂಗಳು ನಮ್ಮ ಭಾರತದಲ್ಲಿ ಇನ್ನೊಂದು ಸಮುದಾಯ ರೇಡಿಯೋ ಕೆಂದ್ರ 25 ರಂದು ಮದ್ಯಪ್ರದೇಶದ ಓರ್ಚಾದಲ್ಲಿ ಪ್ರಾರಂಭವಾಗಲಿದೆ ಅದರ ಹೆಸರು "ಬುಂದೇಲ್ ಖಂಡಿ" 90.4 ಕಂಪನಾಂಕದಲ್ಲಿ. ಮುಂದಿನ ತಿಂಗಳು ನಮ್ಮ ಕರ್ನಾಟಕದಲ್ಲಿ "ನಮ್ಮಧ್ವನಿ" ಸಮುದಾಯ ರೇಡಿಯೋ ಕೆಂದ್ರ ಸಹ ತರಂಗಗಳಲ್ಲಿ ಪ್ರಸಾರವಾಗಲಿದೆ. ಇದು ಸಹ 90.4 ಕಂಪನಾಂಕಗಳಲ್ಲಿ ಪ್ರಸಾರವಾಗಲಿದೆ. ಇವರ ಕೆಲಸಗಳು ಯಶಸ್ಸಾಗಲಿ ಎಂದು ಅ ದೇವರಲ್ಲಿ ಕೇಳಿಕೊಳ್ಳೋಣ&lt;BR /&gt;&lt;BR /&gt;ಇದರ ಕುರಿತಾದ ಸಣ್ಣ ವಿಡಿಯೋ ವಿಕ್ಷಿಸಿ: http://in.youtube.com/watch?v=k1Bofdx52Ss</description>
      <link>http://sumneonline.com/main/blog/ಬಲಗ/tabid/108/EntryID/137/Default.aspx</link>
      <comments>http://sumneonline.com/main/blog/ಬಲಗ/tabid/108/EntryID/137/Default.aspx#Comments</comments>
      <guid isPermaLink="true">http://sumneonline.com/main/Default.aspx?tabid=108&amp;EntryID=137</guid>
      <pubDate>Fri, 17 Oct 2008 06:24:02 GMT</pubDate>
      <slash:comments>5</slash:comments>
      <trackback:ping>http://sumneonline.com/main/DesktopModules/Blog/Trackback.aspx?id=137</trackback:ping>
    </item>
    <item>
      <title>ಕರಿ ಬೇವು</title>
      <description>ಸ‌ಂಸ್ಕ್ರುತದಲ್ಲಿ : ಸುರಭಿ ನಿಂಬ, ಕ್ರುಷ್ಣ ನಿಂಬ‌
ಹಿಂದಿಯಲ್ಲಿ : ಮೀರಾ ನೀಮ್
</description>
      <link>http://sumneonline.com/main/blog/ಬಲಗ/tabid/108/EntryID/135/Default.aspx</link>
      <comments>http://sumneonline.com/main/blog/ಬಲಗ/tabid/108/EntryID/135/Default.aspx#Comments</comments>
      <guid isPermaLink="true">http://sumneonline.com/main/Default.aspx?tabid=108&amp;EntryID=135</guid>
      <pubDate>Wed, 08 Oct 2008 15:23:15 GMT</pubDate>
      <slash:comments>0</slash:comments>
      <trackback:ping>http://sumneonline.com/main/DesktopModules/Blog/Trackback.aspx?id=135</trackback:ping>
    </item>
    <item>
      <title>ಪುಟ್ಟ ಪ್ರಪಂಚ‌</title>
      <description>ನನ್ನ ಪ್ರಪಂಚದ ಪರಿದಿ</description>
      <link>http://sumneonline.com/main/blog/ಬಲಗ/tabid/108/EntryID/134/Default.aspx</link>
      <comments>http://sumneonline.com/main/blog/ಬಲಗ/tabid/108/EntryID/134/Default.aspx#Comments</comments>
      <guid isPermaLink="true">http://sumneonline.com/main/Default.aspx?tabid=108&amp;EntryID=134</guid>
      <pubDate>Mon, 06 Oct 2008 13:31:57 GMT</pubDate>
      <slash:comments>2</slash:comments>
      <trackback:ping>http://sumneonline.com/main/DesktopModules/Blog/Trackback.aspx?id=134</trackback:ping>
    </item>
    <item>
      <title>ತರ್ಲೆ ಮಾತು.</title>
      <description>*) ಮೊನ್ನೆ ರೇಡಿಯೋಸಿಟಿಯ ಕಾರ್ಯಕ್ರಮದಲ್ಲಿ, ಕೇಳಿದ ಪ್ರಶ್ನೆ ಇದು</description>
      <link>http://sumneonline.com/main/blog/ಬಲಗ/tabid/108/EntryID/133/Default.aspx</link>
      <comments>http://sumneonline.com/main/blog/ಬಲಗ/tabid/108/EntryID/133/Default.aspx#Comments</comments>
      <guid isPermaLink="true">http://sumneonline.com/main/Default.aspx?tabid=108&amp;EntryID=133</guid>
      <pubDate>Mon, 06 Oct 2008 09:29:42 GMT</pubDate>
      <slash:comments>2</slash:comments>
      <trackback:ping>http://sumneonline.com/main/DesktopModules/Blog/Trackback.aspx?id=133</trackback:ping>
    </item>
    <item>
      <title>ವಿಕಾಸ ವಾದ</title>
      <description>ಕೇಕೆ ಹಾಕಿ .......................</description>
      <link>http://sumneonline.com/main/blog/ಬಲಗ/tabid/108/EntryID/132/Default.aspx</link>
      <comments>http://sumneonline.com/main/blog/ಬಲಗ/tabid/108/EntryID/132/Default.aspx#Comments</comments>
      <guid isPermaLink="true">http://sumneonline.com/main/Default.aspx?tabid=108&amp;EntryID=132</guid>
      <pubDate>Mon, 06 Oct 2008 09:28:31 GMT</pubDate>
      <slash:comments>2</slash:comments>
      <trackback:ping>http://sumneonline.com/main/DesktopModules/Blog/Trackback.aspx?id=132</trackback:ping>
    </item>
    <item>
      <title>ದಸರಾ ಹಬ್ಬ</title>
      <description>ದಸರಾ ಹಬ್ಬವು ನಮ್ಮ ಕನ್ನಡಿಗರ ನಾಡ ಹಬ್ಬ. ವಿಶೇಷವಾಗಿ ಮೈಸೂರಿನಲ್ಲಿ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರಗೊಳಿಸಲಾಗುತ್ತದೆ. ಮೈಸೂರು ಮಹಾನಗರವು ಕನ್ನಡ ನಾಡಿನ ಸಂಸ್ಕೃತಿಯ ರಾಜಧಾನಿ. ಮೈಸೂರು ದಸರಾ ಎಂದರೆ ಅದು ಸಂಬ್ರಮದ ನಮ್ಮ ನಾಡ ಹಬ್ಬ. ಆಶ್ವಯುಜ ಮಾಸದ ಪಾಡ್ಯದಿಂದ ಪ್ರಾರಂಭವಾಗಿ ದಶಮಿಯ ಪೂರ್ತಿ ಹತ್ತು ದಿನಗಳ ತನಕ ಆಚರಣೆಯಲ್ಲಿ ಇರುತ್ತದೆ. ಹತ್ತು ದಿನಗಳಲ್ಲಿ ಮೊದಲ ಒಂಬತ್ತು ದಿನಗಳು ನವರಾತ್ರಿ ಎನಿಸಿ ಕಡೆಯ ಹತ್ತನೇ ದಿನ ವಿಜಯದಶಮಿ ಎಂದು ಆಚರಣೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಇನ್ನೊಂದು ವಿಶೇಷ ಮನೆಗಳಲ್ಲಿ ಗೊಂಬೆ ಕೂರಿಸುವುದು. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ, ಪಟ್ಟದ ಗೊಂಬೆ ಮತ್ತು ಇತರ ಗೊಂಬೆಗಳನ್ನು ಕೂರಿಸುವರು . ಇದಕ್ಕೆ ಅಂತಾನೇ ಮದುವೆಗಳಲ್ಲಿ ನೂತನ ದಂಪತಿಗಳಿಗೆ ತೇಗ ಅಥವಾ ಚಂದನದ ಮರದಿಂದ ಮಾಡಿದ ಗೊಂಬೆಗಳನ್ನು ನೀಡುವರು. ಪ್ರತಿದಿನ ಸಂಜೆಯ ವೇಳೆಯಲ್ಲಿ ಪುಟ್ಟ ಮಕ್ಕಳನ್ನು ಕರೆದು ಗೊಂಬೆ ಬಾಗಿನ ಎಂದು ತಿಂಡಿಗಳನ್ನು ಕೊಡುವರು. ಮೈಸೂರನ್ನು ಆಳಿದ ರಾಜ ಮನೆತನವಾದ ಒಡೆಯರ ಕುಲದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲಾ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ದಸರ ಸಮಯದಲ್ಲಿ ನಡೆಯುವ ಇನ್ನೊಂದು ಕಾಯಕ್ರಮವೆಂದರೆ ಮಹಾರಾಜರ ಖಾಸಗಿ ದರ್ಬಾರ್. ಅಂಬಾ ವಿಲಾಸ ಅರಮನೆಯಲ್ಲಿ ನವರಾತ್ರಿಯ ಒಂಭತ್ತು ದಿನಗಳು ನಡೆಯುವ ಒಂದು ವಿಶಿಷ್ಟ ಕಾರ್ಯಕ್ರಮ. ದಸರಾ ಪ್ರಾರಂಭವಾಗುವ ಮೊದಲು ನಾಲ್ಕು ಟನ್ ತೂಗುವ ಮೈಸೂರಿನ ಅತ್ಯಂತ ಪ್ರಾಚೀನ ರತ್ನ ಸಿಂಹಾಸನವನ್ನು ತಂದು ಅಣಿಗೊಳಿಸಲಾಗುತ್ತದೆ. ಒಡೆಯರ್ ಮನೆತನದ ರಾಜ ಪೂಜಾವಿಧಾನಗಳನ್ನು ನೆರವೇರಿಸಿ, ಸುಮಾರು ನಲವತ್ತೈದು ನಿಮಿಷಗಳ ಕಾಲ ಖಾಸಗಿ ದರ್ಬಾರ್ ನಿರ್ವಹಿಸುವ ಸಂಪ್ರದಾಯವಿದೆ. ಹಿಂದೆ ರಾಜಾಡಳಿತವಿದ್ದ ಕಾಲದಲ್ಲಿ ಯಾವ ರೀತಿ ಮಹಾರಾಜರ ದರ್ಬಾರ್ ನಡೆಯುತ್ತಿತ್ತೂ ಅದೇ ರೀತಿ, ಕಂಕಣಧಾರಿಯಾದ ಒಡೆಯರ್ ರತ್ನ ಖಚಿತ ಸಿಂಹಾಸನಾರೂಢರಾಗಿ, ಪರಂಪರಾಗತ ವಿಧಿವಿಧಾನಗಳಂತೆ ದರ್ಬಾರ್ ನಡೆಸುತ್ತಾರೆ. ಈ ದರ್ಬಾರ್ ನಡೆಯುವ ಹಾಲ್‍ನಲ್ಲಿ ರಾಜ ಪರಿವಾರದವರು, ರಾಜ ಪುರೋಹಿತರು, ಅತಿಥಿ ಗಣ್ಯರು, ದೇವಾಲಯಗಳ ಅರ್ಚಕರು, ಅರಮನೆ ಸೇವಕರು ಮುಂತಾಗಿ ಎಲ್ಲರೂ ಹಾಜರಿರುತ್ತಾರೆ. ಈ ಖಾಸಗಿ ದರ್ಬಾರ್ ನೋಡಿದರೆ, ಹಿಂದಿನ ಕಾಲದಲ್ಲಿ ಇದ್ದ ಅರಮನೆಗಳಲ್ಲಿ ನಡೆಯುತಿದ್ದ ಆಚರಣೆಗಳ ಕಲ್ಪನೆ ಬರುತ್ತದೆ. ಪ್ರತಿವರ್ಷವೂ ತಪ್ಪದೆ ನಡೆಯುವ ಈ ಖಾಸಗಿ ದರ್ಬಾರ್ ದಸರ ಮಹೋತ್ಸವದ ಒಂದು ಪ್ರಮುಖ ಆಕರ್ಷಣೆಯಾಗಿದೆ. ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ. ಸಂಗೀತ, ಸಾಹಿತ್ಯ, ನಾಟಕಗಳು, ಚಿತ್ರಕಲೆ, ಕ್ರೀಡೆಗಳು, ನೃತ್ಯಕಲೆ, ಜಾನಪದಕಲೆ, ಹರಿಕಿರ್ತನೆ, ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾ ಪ್ರೇಮಿಗಳಿಗೆ ಮನರಂಜನೆಯನ್ನು ಉಂಟುಮಾಡುತ್ತದೆ. ಇದರ ಜೊತೆಗೆ ಪ್ರಶಸ್ತಿ ಪಡೆದ ಹಲವಾರು ಚಲನಚಿತ್ರ ಪ್ರದರ್ಶನವನ್ನು ಸಹ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುತ್ತಾರೆ ಇದರಿಂದ ಚಿತ್ರರಸಿಕರಿಗೆ ಮುದನೀಡುತ್ತದೆ. ಇದರ ಜೊತೆಗೆ ಅರಮನೆ ಮತ್ತು ಎಲ್ಲಾ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿರುತ್ತಾರೆ. ಇದರಿಂದ ಇಡೀ ಮೈಸೂರು ನಗರ ಬೆಳಕಿನಿಂದ ತುಂಬಿರುತ್ತದೆ. ಈ ಎಲ್ಲಾ ದೃಶ್ಯಗಳನ್ನು ನೋಡಲು ಲಕ್ಷಾಂತರ ಜನರು ಕರ್ನಾಟಕ ರಾಜ್ಯ ಮಾತ್ರ ವಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಸಹ ಬರುತ್ತಾರೆ. ಈ ದಸರಾ ಹಬ್ಬವನ್ನು ನಮ್ಮ ಹಳ್ಳಿಗಳಲ್ಲಿ ಸಹ ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಈ ಜಂಬೂಸವಾರಿಯ ದಿನ ತಮ್ಮ ತಮ್ಮ ಮನೆಯಲ್ಲಿರುವ ಎತ್ತಿನಬಂಡಿ, ಹಸುಗಳನ್ನು, ವಾಹನಗಳನ್ನು ತೊಳೆದು ಸಿಂಗಾರವನ್ನು ಮಾಡಿ ಊರಿನ ಸುತ್ತಲೂ ಸಹ ಮೆರವಣಿಗೆಯನ್ನು ಮಾಡುತ್ತಾರೆ. ಇದನ್ನು ನೋಡಲು ಊರಿನ ಎಲ್ಲಾ ಜನರು ಭಾಗವಹಿಸಿ ನೋಡಿ ಸಂತೋಷ ಪಡುತ್ತಾರೆ.</description>
      <link>http://sumneonline.com/main/blog/ಬಲಗ/tabid/108/EntryID/130/Default.aspx</link>
      <comments>http://sumneonline.com/main/blog/ಬಲಗ/tabid/108/EntryID/130/Default.aspx#Comments</comments>
      <guid isPermaLink="true">http://sumneonline.com/main/Default.aspx?tabid=108&amp;EntryID=130</guid>
      <pubDate>Tue, 30 Sep 2008 10:41:59 GMT</pubDate>
      <slash:comments>2</slash:comments>
      <trackback:ping>http://sumneonline.com/main/DesktopModules/Blog/Trackback.aspx?id=130</trackback:ping>
    </item>
    <item>
      <title>ಗಾಂಧಿ ಜಯಂತಿ</title>
      <description>ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ  ಹಬ್ಬ  ಕಾರಣ ಅಂದು  ಗಾಂಧಿ ಜಯಂತಿ.  ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ.  ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾದನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಅದರ ಜೊತೆಗೆ ಅಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ  ಶ್ರಮದಾನ ಮಾಡುತ್ತಾರೆ. ಶಾಲಾ ಮಕ್ಕಳು ಸಹ ಬೆಳಿಗ್ಗೆ ಬೇಗನೆ ಎದ್ದು ಜಳಕ ಮಾಡಿ, ರಾಷ್ಟ್ರ ಪಿತನಿಗೆ ನಮಿಸಿ,  ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ. ಇಂತಾ ಮಹಾನ ವ್ಯಕ್ತಿಯ ಜನ್ಮ ದಿನವಾದ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇದಿಸಿರುವುದು ಹೆಮ್ಮೆಯ ಸಂಗತಿಯು ಹೌದು.  ನಿಮಗೆ ತಿಳಿದ ಹಾಗೆ ಗಾಂಧೀಜಿ ಯವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು ಇವರ ಪೂರ್ಣ ಹೆಸರು ಮೋಹನದಾಸ್ ಕರಮ‍ಚಂದ್ ಗಾಂಧಿ ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ ,ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ  ಕಸ್ತೂರಿಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ  ಮತ್ತು ದೇವದಾಸ್ ಗಾಂಧಿ . 19 ನೆಯ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನಗರದ   ಯೂನಿವರ್ಸಿಟಿ ಕಾಲೇಜಿನಲ್ಲಿ ವಕೀಲಿ ವೃತ್ತಿಗಾಗಿ ತರಬೇತಿ  ಪಡೆಯಲು ತೆರಳಿ ತರಬೇತಿ ಯನ್ನು ಮುಗಿಸಿ ಬಂದು.  ಮುಂಬೈ  ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಬಹಳ ಪ್ರಯತ್ನಿಸಿದರು. ಆದರೆ ಹೆಚ್ಚು ಯಶಸ್ಸು  ಕಾಣದಿದ್ದರಿಂದ   ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾ ಕ್ಕೆ ಕೆಲಸದ ಮೇಲೆ ತೆರಳಿದರು.ಅಲ್ಲಿ ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿ ಅಲ್ಲಿನ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ಆರಂಭಿಸಿದರು. ಅಲ್ಲಿನ ಪೀಟರ್ ಮ್ಯಾರಿಟ್ಸ್ ಬರ್ಗ್ ಎಂಬ ನಗರದಲ್ಲಿ ರೈಲಿನಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡಿದ್ದರೂ ಅಲ್ಲಿ ಕೂರಲು ಬಿಡದೆ ರೈಲಿನಿಂದ ಹೊರಹಾಕಿದಾಗ ಅವರ ವರ್ಣಭೇದ ನೀತಿಯ ವಿರುದ್ಧ ಹೋರಾಡುವ ನಿಶ್ವಯ ಸ್ಥಿರವಾಯಿತು. ನವಂಬರ್ 6, 1913 ರಲ್ಲಿ ಭಾರತೀಯ ಗಣಿಗಾರರ ಒಂದು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಗಾಂಧೀಜಿ ಬಂಧಿತರಾದರು. ಗಾಂಧೀಜಿವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ, ಮತ್ತು ರಷ್ಯದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್‍ಸ್ಟಾಯ್ ಅವರ ಬರಹಗಳು. ಗಾಂಧೀಜಿಯವರು ಅಮೆರಿಕನ್ ಸಾಹಿತಿ ಹೆನ್ರಿ ಡೇವಿಡ್ ಥೋರ್ಯೂ ನ ಪ್ರಬಂಧಗಳಿಂದಲೂ ಪ್ರಭಾವಿತರಾಗಿದ್ದರು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿ ಭಾರತೀಯರು ಬ್ರಿಟಿಷರ ಪರವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಕೇಳಿಕೊಂಡು ಇದಕ್ಕಾಗಿ ಪ್ರಚಾರ ಮಾಡಿದರು.ಯುದ್ಧದ ನಂತರ ಗಾಂಧೀಜಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಜೊತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು. ಗಾಂಧೀಜಿಯವರ ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ - ಪರದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು, ಅದರಲ್ಲಿ ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು, ವರ್ಜಿಸಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು. 1920 ರಂದು  ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು. ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ಒಂದು ದಂಡಿ ಯಾತ್ರೆ. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು.  ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲ ಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ  ನಡೆಸಿದರು. ಮಾರ್ಚ್ 3, 1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.”ಭಾರತ ಬಿಟ್ಟು ತೊಲಗಿರಿ” ಚಳುವಳಿ 1942 ರಲ್ಲಿ ಆರಂಭವಾಯಿತು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಬಂಧನದಲ್ಲಿರಿಸಿದರು.                                                                                                                                          ತತ್ವಗಳು: ಅವರ ಮುಖ್ಯ ತತ್ವಗಳು ಸತ್ಯ ಮತ್ತು ಅಹಿಂಸೆ. ಅಹಿಂಸೆಯ ತತ್ವ ಭಾರತೀಯ ಧಾರ್ಮಿಕ ವಿಚಾರದಲ್ಲಿ ಅನೇಕ ಶತಮಾನಗಳಿಂದ ಅಸ್ತಿತ್ವದಲ್ಲಿರುವ ತತ್ವ. ಗಾಂಧೀಜಿಯವರು ಕಟ್ಟಾ ಸಸ್ಯಾಹಾರಿಗಳು. ಲಂಡನ್ ನಲ್ಲಿ ಓದುತ್ತಿದ್ದಾಗ ಅವರು ಸಸ್ಯಾಹಾರದ ಬಗೆಗೆ ಪುಸ್ತಕಗಳನ್ನೂ ಬರೆದಿದ್ದರು. ಹಿಂದೂ ಮತ್ತು ಜೈನ ಸಮಾಜಗಳಲ್ಲಿ ಸಸ್ಯಾಹಾರದ ತತ್ವ ಶತಮಾನಗಳಿಂದಲೂ ಆಳವಾಗಿ ಬೇರೂರಿರುವುದು. ವಿವಿಧ ರೀತಿಯ ಆಹಾರ ಕ್ರಮಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡ ಗಾಂಧೀಜಿಯವರ ನಂಬಿಕೆ ನಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿಲ್ಲವೆಂಬುದು. ಕಾಲಕಾಲಕ್ಕೆ ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಚಳುವಳಿಯಲ್ಲೂ ಉಪಯೋಗಿಸಿದವರು. 36 ನೆಯ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ಹಾಗೆಯೇ ವಾರದಲ್ಲಿ ಒಂದು ದಿನ ಮೌನವ್ರತವನ್ನು ಆಚರಿಸುತ್ತಿದ್ದರು. ಇದರಿಂದ ಆತ್ಮಶಾಂತಿ ಸಿಕ್ಕುತ್ತದೆಂಬುದು ಗಾಂಧೀಜಿಯವರ ನಂಬಿಕೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಶ್ರೀಮಂತ ಉಡುಪುಗಳನ್ನು ಗಾಂಧೀಜಿ ಎಂದಿಗೂ ಧರಿಸಲಿಲ್ಲ. ಭಾರತದ ಅತ್ಯಂತ ಬಡ ಮನುಷ್ಯ ಒಪ್ಪಿಕೊಳ್ಳಬಹುದಾದ ಉಡುಪುಗಳನ್ನು ಮಾತ್ರ ಅವರು ಧರಿಸುತ್ತಿದ್ದರು. ಮನೆಯಲ್ಲಿಯೇ ನೇಯ್ದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು. ಗಾಂಧೀಜಿಯವರ ಚರಕ ನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಬಾವುಟದಲ್ಲಿಯೂ ಸೇರಿತು. ಸತ್ಯದೊಂದಿಗೆ ನನ್ನ ಪ್ರಯೋಗಗಳು ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ. ಜನಪ್ರಿಯವಾಗಿ ಮಹಾತ್ಮ ಗಾಂಧಿ, ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು. ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ತಂದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು. ಗಾಂಧೀಜಿಯವರ ಹೇಳಿಕೆಯಂತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನಂಬಿಕೆಗಳಿಂದ ಬಂದಂಥವು: ಸತ್ಯ ಮತ್ತು ಅಹಿಂಸೆ. ಬನ್ನಿ ಅವರ ಆದಿಯಲ್ಲಿ ನಾವೂ ಸಹ ಸಾಗಲು ಪ್ರಯತ್ನಿಸೋಣ.</description>
      <link>http://sumneonline.com/main/blog/ಬಲಗ/tabid/108/EntryID/129/Default.aspx</link>
      <comments>http://sumneonline.com/main/blog/ಬಲಗ/tabid/108/EntryID/129/Default.aspx#Comments</comments>
      <guid isPermaLink="true">http://sumneonline.com/main/Default.aspx?tabid=108&amp;EntryID=129</guid>
      <pubDate>Tue, 30 Sep 2008 06:57:13 GMT</pubDate>
      <slash:comments>1</slash:comments>
      <trackback:ping>http://sumneonline.com/main/DesktopModules/Blog/Trackback.aspx?id=129</trackback:ping>
    </item>
    <item>
      <title>ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು</title>
      <description>ಜೀವನ ಸರಳವಾಗಿದ್ದಷ್ಟೂ ನೆಮ್ಮದಿ ಹೆಚ್ಚುತ್ತದೆ. ಹಾಗೆ ಜೀವನವನ್ನು ಸರಳಗೊಳ್ಳಿಸುವ ವಿಧಾನ ಇಲ್ಲಿದೆ!&lt;BR /&gt;&lt;BR /&gt;1. ಇಷ್ಟವಿಲ್ಲದ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಬೇಡಿ.&lt;BR /&gt;2. ಎಲ್ಲಾ ಕೆಲಸವನ್ನು ಪರ್ಪೆಕ್ಟ್ ಅಥವಾ ನಿಖರವಾಗಿ ಮಾಡಲು ಹೋಗಬೇಡಿ.&lt;BR /&gt;3. ಮನೆಯನ್ನು ಸ್ವಚ್ಚಗೊಳಿಸುವ ಕೆಲಸವನ್ನು ಸರಳವಾಗಿಸಿಕೊಳ್ಳಿ. ಹಾಗು ಅದನ್ನು ಪ್ರತಿ ಬಾರಿಯೂ ಅನುಸರಿಸಿ.&lt;BR /&gt;4. ಫೋನ್, ವಾಟರ್, ಕ್ರೆಡಿಟ್ ಕಾರ್ಡ್ ಇತ್ಯಾದಿಗಳಿಗೆ ಆನ್ ಲೈನ್ ನಿಂದ ಬಿಲ್ಲು ಪಾವತಿಸುವುದನ್ನು ರೂಡಿಸಿಕೊಳ್ಳಿ. ಇದು ನಿಮ್ಮ ಸಮಯ ಉಳಿಸುತ್ತದೆ. ಅನಗತ್ಯವಾಗಿ ತಡವಾಗಿದ್ದಕ್ಕೆ ದಂಡ ಕಟ್ಟುವುದು  ತಪ್ಪುತ್ತದೆ.&lt;BR /&gt;5. ನಿಮ್ಮ ಹಾಡು, ಚಲನಚಿತ್ರ, ಪುಸ್ತಕ ಇತ್ಯಾದಿ ಸಂಗ್ರಹಗಳಲ್ಲಿ ನಿಮಗೆ ತುಂಬ ಇಷ್ಟವಾದುದನ್ನು ಮಾತ್ರ ಇಟ್ಟುಕೊಳ್ಳಿ ಉಳಿದದ್ದನ್ನು  ಬಿಟ್ಟು ಬಿಡಿ.&lt;BR /&gt;6. ನಿಮ್ಮ ಪರ್ಸ್ ಅನ್ನು ಕ್ಲೀನ್ ಮಾಡಿ. ಅದರಲ್ಲಿ ಅನಗತ್ಯವಾದುದನ್ನು ತೆಗೆದು ಬಿಡಿ.&lt;BR /&gt;7. ನಿಮಗೆ ಬೇಡವಾದ ಪೋಸ್ಟ್ ಗಳನ್ನು ನಾಶಪಡಿಸಿ. ಬೇಡವಾದ ಕಾಲ್, ಎಸ್. ಎಂ.ಎಸ್, ಮೇಲ್ ಗಳ ಮೇಲೆ ಸಮಯ ವ್ಯರ್ಥ ಮಾಡದಿರಿ.&lt;BR /&gt;8. ನಿಮ್ಮ ವಾರ್ಡ್ ರೋಬ್ ಅನ್ನು ನೀಟಾಗಿ ಇಟ್ಟುಕೊಳ್ಳಿ.&lt;BR /&gt;9. ನೀವು ಉಪಯೋಗಿಸದ ಮೇಲ್  ಅಥವಾ ಸೋಶಿಯಲ್ ನೆಟ್ ವರ್ಕ್ ಅಕೌಂಟ್  ಅನ್ನು ಅಳಿಸಿಹಾಕಿ.&lt;BR /&gt;10. ಜಾಹೀರಾತುಗಳು ನಿಮ್ಮ ಫೋನ್ ಗೆ ಬರುತ್ತಿದ್ದರೆ ಅವರಿಗೆ ಇನ್ನು ಮುಂದೆ ಕಾಲ್ ಮಾಡಬಾರದೆಂದು ತಿಳಿಸಿ.&lt;BR /&gt;11. ನಿಮ್ಮ ಕಾರು ಹಾಗು ಬೈಕುಗಳ ಸರ್ವೀಸ್ ಅನ್ನು ಪ್ಲಾನ ಮಾಡಿ. ಅದರ ಪ್ರಕಾರ ಮಾಡುತ್ತಿರಿ.&lt;BR /&gt;12. ನಿಮ್ಮ ಬಿಲ್, ಡಾಕ್ಯುಮೆಂಟ್ ಗಳ ಫೈಲ್ ಮಾಡಿ.&lt;BR /&gt;13. ಪ್ರತಿದಿನ ಬೆಳಿಗ್ಗೆ ಉತ್ತಮ ತಿಂಡಿಯನ್ನು ತಿನ್ನಿ.&lt;BR /&gt;14. ನಿಮಗೆ ಶಾಂತಿ, ನೆಮ್ಮದಿ ಬೇಕಾದಾಗ ನಿಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ.&lt;BR /&gt;15. ಒಂದು ಉತ್ತಮ ಗುರಿ ಇಟ್ಟ ಕೊಂಡು ಅದನ್ನು ಸಾಧಿಸಲು ಶ್ರಮ ಪಡಿ.&lt;BR /&gt;16. ನಿಮ್ಮ ಕೆಟ್ಟ ಚಟಗಳನ್ನು ನಿಯಂತ್ರಿಸಲು ಪ್ರಯತ್ನ ಪಡಿ.&lt;BR /&gt;17. ಜಾಹೀರಾತು ನೋಡುವದನ್ನು, ಓದುವದನ್ನು ಕಡಿಮೆ ಮಾಡಿ.&lt;BR /&gt;18. ಸಂತೋಷಕ್ಕಾಗಿ, ಮನೋರಂಜನೆಗಾಗಿ ಓದಿ.&lt;BR /&gt;19. ಯಾವಾಗಲೂ ಒಂದು ಕೆಲಸವನ್ನು ಒಮ್ಮೆ ಮಾಡಿ.&lt;BR /&gt;20. ಸಹಾಯಕ್ಕಾಗಿ ಇನ್ನೊಬ್ಬರನ್ನು ಕೇಳಲು ಸಂಕೋಚ ಪಡದಿರಿ.&lt;BR /&gt;</description>
      <link>http://sumneonline.com/main/blog/ಬಲಗ/tabid/108/EntryID/127/Default.aspx</link>
      <comments>http://sumneonline.com/main/blog/ಬಲಗ/tabid/108/EntryID/127/Default.aspx#Comments</comments>
      <guid isPermaLink="true">http://sumneonline.com/main/Default.aspx?tabid=108&amp;EntryID=127</guid>
      <pubDate>Fri, 19 Sep 2008 09:27:01 GMT</pubDate>
      <slash:comments>4</slash:comments>
      <trackback:ping>http://sumneonline.com/main/DesktopModules/Blog/Trackback.aspx?id=127</trackback:ping>
    </item>
    <item>
      <title>ಬಿಹಾರದ ಕಣ್ಣೀರ ಕಥೆ </title>
      <description>ನೇಪಾಳ ಗಡಿಭಾಗದ ಕುಶಾದಲ್ಲಿ ಕೋಸಿ ನದಿಗೆ ಕಟ್ಟಿದ ಒಡ್ಡು ಒಡೆದ ಪರಿಣಾಮ ಕೆಲವೇ ಗಂಟೆಗಳಲ್ಲಿ ಉತ್ತರ ಬಿಹಾರದ ಐದು ಜಿಲ್ಲೆಗಳಾದ ಸುಪೌಲ್, ಅರಾರಿಯ, ಸಹರ್ಸಾ, ಮಾಧೇಪುರ ಮತ್ತು ಪುರ್ನಿಯಾ ಅಸ್ತಿತ್ವವೇ ಇಲ್ಲದಂತೆ ಜಲಾವೃತಗೊಂಡವು. ಈ ಪ್ರಾಂತಗಳು ಪ್ರತಿ ವರ್ಷ ಎದುರಿಸುತ್ತಿದ್ದ ಪ್ರವಾಹಕ್ಕಿಂತ ದುಪ್ಪಟ್ಟು ನಷ್ಟವನ್ನು ಈ ಬಾರಿಯ ವಿಪತ್ತು ತಂದೊಡ್ಡಿದೆ. ಬಿಹಾರದ ಕಣ್ಣೀರ ನದಿಯೆಂದೆ ಜನಜನಿತವಾಗಿರುವ ಕೋಸಿ ನದಿಯ ಪ್ರವಾಹದಿಂದಾಗಿ ಬಿಹಾರದ ಜನತೆ ಅಕ್ಷರಶಃ ತಮ್ಮ ಜೀವನದೊಂದಿಗೆ ಹೋರಾಟಕ್ಕಿಳಿದಿದ್ದಾರೆ. ಲಕ್ಷಾಂತರ ಮಂದಿ ಪ್ರವಾಹದಿಂದಾಗಿ ತಮ್ಮ ಮನೆಮಠ, ಕುಟುಂಬಿಕರು, ಸಂಬಂಧಿಗಳು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಭೀಕರ ಪ್ರವಾಹದ ಪರಿಣಾಮ ಬಿಹಾರದ ಜನತೆ ತುಂಬಲಾರದ ನಷ್ಟಕ್ಕೀಡಾಗಿದ್ದಾರೆ; ಎಲ್ಲವನ್ನೂ ನೆರೆ ಕೊಚ್ಚಿಕೊಂಡು ಹೋಗಿದೆ. ಬಿಹಾರದಲ್ಲಿ ಹರಿಯುವ ಹೆಚ್ಚಿನ ನದಿಗಳ ಮೂಲವಿರುವುದು ನೇಪಾಳದಲ್ಲಿ. ಮಳೆಗಾಲದ ಸಂದರ್ಭದಲ್ಲಿ ಪ್ರವಾಹವು ಸಾವಿರಾರು ಜನರನ್ನು ಬೀದಿಪಾಲು ಮಾಡುವುದರ ಜೊತೆಗೆ ಪೈರು, ಎಕರೆಗಟ್ಟಲೆ ಭೂಮಿ, ಸಾವಿರಾರು ಮನೆಗಳು, ರಸ್ತೆ, ಸೇತುವೆ, ಅಣೆಕಟ್ಟು ಮತ್ತು ನೂರಾರು ಶಾಲೆಗಳನ್ನು ಧ್ವಂಸ ಮಾಡುತ್ತಿದೆ. ನೀರಿನ ಮಟ್ಟ ತಗ್ಗಿದರೂ ಮಕ್ಕಳಿಗೆ ತಿಂಗಳಿಡೀ ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ದೇಶದಲ್ಲಿಯೇ ಬಿಹಾರ ರಾಜ್ಯ ಅತ್ಯಂತ ನಿಧಾನವಾಗಿ ಅಭಿವೃದ್ಧಿ ಹೊಂದಲು ಪ್ರಮುಖ ಕಾರಣವೇ ಪ್ರವಾಹ ಬಾಧೆ. ಗ್ರಾಮೀಣ ಆರ್ಥಿಕತೆ ಹೊಂದಿರುವ ಬಿಹಾರದಲ್ಲಿ ಹೇಳಿಕೊಳ್ಳುವಂತಹ ಉದ್ಯಮಗಳೂ ಇಲ್ಲ. 83 ದಶಲಕ್ಷ ಮಂದಿ ಜೀವನೋಪಾಯಕ್ಕಾಗಿ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಪ್ರವಾಹದ ಬಲಿಪಶುಗಳಲ್ಲಿ ಹೆಚ್ಚಿನವರು ಮಕ್ಕಳು. ಸಾವಿರಾರು ಮಕ್ಕಳು ನಿರ್ಗತಿಕರಾಗಿದ್ದಾರೆ. ನೇಪಾಳದಲ್ಲಿ ಪ್ರವಾಹ ತಡೆಗಾಗಿ ನಿರ್ಮಿಸಿದ್ದ ಮೊರಿಯು ಒಡೆದ ಕಾರಣ ಕೋಸಿ ನದಿ ಉಕ್ಕಿ ಹರಿಯುತ್ತಿದ್ದು, ಬಿಹಾರದ 16 ಜಿಲ್ಲೆಗಳು ಸಂಕಷ್ಟಕ್ಕೀಡಾಗಿವೆ.&lt;BR /&gt;ಭೀಕರ ಪ್ರಕೃತಿ ವಿಕೋಪದಿಂದಾಗಿ ಮರಣ ಹೊಂದಿದವರ ಸಂಖ್ಯೆ 70ಕ್ಕೆ ಹೆಚ್ಚಳಗೊಂಡಿದೆ.  16 ಜಿಲ್ಲೆಗಳ 36.4 ಮಿಲಿಯನ್  ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸೇನೆ ಹಾಗೂ ನೆರವು ಕಾರ್ಯಕರ್ತರು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. 396 ದೋಣಿಗಳು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ. ಭಾರೀ ಪ್ರವಾಹದಿಂದಾಗಿ 242 ಪಂಚಾಯತ್‌ಗಳು ಮತ್ತು 671 ಹಳ್ಳಿಗಳು ನೀರಿನಲ್ಲಿ ಮುಳುಗಿವೆ.&lt;BR /&gt;ಇದೇ ರೀತಿ ಬಿಹಾರದಲ್ಲಿ ಪ್ರವಾಹ ಹಲವಾರು ಬಾರಿ ಆಗಿದೆ 2004 ರಲ್ಲಿ ಅದ ಪ್ರವಾಹದಿಂದ 20 ಜಿಲ್ಲೆಗಳು ಜಲಾವೃತವಾಗಿದ್ದರ ಪರಿಣಾಮವಾಗಿ 21 ಮಿಲಿಯನ್ ಜನರು ನಿರಾಶ್ರಿತರಾದರು. ನಂತರ 2007 ರಲ್ಲಿ ಅದ ಪ್ರವಾಹದಿಂದ 22 ಜಿಲ್ಲೆಗಳು ಜಲಾವೃತವಾಗಿದ್ದು 25 ಮಿಲಿಯನ್ ಜನರು ನಿರಾಶ್ರಿತರಾದರು. 2008 ರ ಪ್ರವಾಹದಿಂದ ನಷ್ಟ ಸಂಭವಿಸಿದ್ದು ಸುಮಾರು 36.4ಮಿಲಿಯನ್ ನಷ್ಟು . ಸಂತ್ರಸ್ತರ ತೆರವಿಗೆ ಸೇನೆಯ ಮೂರೂ ವಿಭಾಗಗಳು ನೆರವಾಗುತ್ತಿವೆ. ಭೂಸೇನೆಯ 19 ಹಾಗೂ ನೌಕಾ ಪಡೆಯ ಮೂರು ತುಕಡಿಗಳ ಸಹಿತ ರಕ್ಷಣಾ ಬಲದ 22 ತುಕಡಿಗಳು ರಕ್ಷಣೆ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿವೆ. ಆಹಾರ ಪೂರೈಕೆಗಾಗಿ ವಾಯು ಸೇನೆಯ 6 ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ತಂಗಲು ನೆಲೆ ಇಲ್ಲ, ಕುಡಿಯಲು ಶುದ್ಧ ನೀರಿಲ್ಲ, ತಿನ್ನಲು ತುತ್ತು ಅನ್ನವೂ ಇಲ್ಲದ ಲಕ್ಷಾಂತರ ಮಂದಿ ಸಂತ್ರಸ್ತರನ್ನು ಮುಕ್ಕಿ ತಿನ್ನಲು ತುದಿಗಾಲಲ್ಲಿ ನಿಂತ ಸಾಂಕ್ರಾಮಿಕ ರೋಗ... ಹೀಗೆ ಭೀಕರ ಪ್ರವಾಹದ ಜೊತೆಯಲ್ಲಿ ಏನೆಲ್ಲ ಸಂಕಷ್ಟಗಳ ಉಡುಗೊರೆಯಾಗಿ ಸಿಗಬಹುದೋ ಅವೆಲ್ಲವೂ ಅಲ್ಲಿ ಠಿಕಾಣಿ ಹೂಡಿದೆ. ಪ್ರವಾಹದಿಂದ   ಸಾವಿರಾರು ಮಕ್ಕಳು ನಿರ್ಗತಿಕರಾಗಿದ್ದಾರೆ. ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲಲು ಇಂತಹವರಿಗೆ ಸಹಾಯದ ಅಗತ್ಯವಿದೆ. ನಾವ್ಯಾಕೆ ಇವರ ಶೋಕವನ್ನು ಹಂಚಿಕೊಳ್ಳಬಾರದು? ಬನ್ನಿ, ಇಂತಹ ಜೀವಗಳಿಗೆ ನಮ್ಮ ನೆರವಿನ ಹಸ್ತ ಚಾಚೋಣ.</description>
      <link>http://sumneonline.com/main/blog/ಬಲಗ/tabid/108/EntryID/128/Default.aspx</link>
      <comments>http://sumneonline.com/main/blog/ಬಲಗ/tabid/108/EntryID/128/Default.aspx#Comments</comments>
      <guid isPermaLink="true">http://sumneonline.com/main/Default.aspx?tabid=108&amp;EntryID=128</guid>
      <pubDate>Fri, 19 Sep 2008 09:26:15 GMT</pubDate>
      <slash:comments>1</slash:comments>
      <trackback:ping>http://sumneonline.com/main/DesktopModules/Blog/Trackback.aspx?id=128</trackback:ping>
    </item>
  </channel>
</rss>