| ಕರ್ನಾಟಕ ಉಗ್ರಗಾಮಿಗಳ ಹೊಸ ತಾಣವೇ? | | ಸುಮ್ನೆ ಸುದ್ದಿ
| raju ಸಮಯ2/22/2008 12:43 AM | |
| ಇತ್ತೀಚಿಗೆ ಕರ್ನಾಟಕ ಪೋಲಿಸರು ಉಗ್ರಗಾಮಿಗಳನ್ನು ಬೆಂಗಳೂರು ಹಾಗೂ ಇತರ ಪ್ರದೇಶಗಳಲ್ಲಿ ಹಿಡಿಯುತ್ತಿದ್ದಾರೆ. ಅಲ್ಲಲ್ಲಿ ಹುಸಿ ಬಾಂಬ್ ಸುದ್ದಿ ಕೇಳಿ ಬರುತ್ತಿದೆ. ಕರ್ನಾಟಕದ ಪ್ರಮುಖ ಜಾಗವನ್ನು ನಾಶ ಪಡಿಸಬೇಕೆಂದು ಉಗ್ರರು ತಿಳಿಸುತ್ತಿದ್ದಾರೆ. ಇದನ್ನು ನೋಡಿದರೆ ಕರ್ನಾಟಕ ಉಗ್ರಗಾಮಿಗಳ ಹೊಸ ತಾಣವಾಗುತ್ತಿದೆ ಅನ್ನಿಸುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವಿದ್ದರೆ ತಿಳಿಸಿ.
|  | | ಅಭಿಪ್ರಾಯ (2) |
ಮುಂದೆ ಓದಿ... |
|
| ಕೊನೇಯ ಲಿಫ್ಟ್ | | ಕೊನೆಯ ಲಿಫ್ತ್
| anantshayan ಸಮಯ2/5/2008 12:32 AM | |
| ನನಗೆ ಮೈಸುರಿನಲ್ಲಿ ಕೆಲಸ ಸಿಕ್ತು. ನೈಟ ಶಿಫ್ಟ ಕೆಲಸ.ಬೆಳೆಗ್ಗೆ ೫ ಕ್ಕೆ ಮನೆಗೆ ಹೋಗಬೇಕು. ಬಸ್ಸು ಇರಲ್ಲಾ. ಅದಕ್ಕೆ ಯಾರಿಗದ್ರು ಲಿಫ್ಟಗಾಗಿ ಕಾಯುತ್ತಾ ಇರುತ್ತೇನೆ.
೩ ತಿ0ಗಳ ಹಿ0ದಿನ ಮಾತು....
ಅವತ್ತು ಒ0ದು ಸ್ಚೂಟಿಗೆ ಕೈ ಮಾಡಿ ಲಿಫ್ಟ ಕೇಳಿದ್ದೆ. "ಯೂ ಇಡಿಯಟ್" ಅ0ತಾ ಹುಡುಗಿ ಧ್ವನಿ ಕೇಳಿ ಬ0ತು. " ಅಯ್ಯೊ, ರಿ ಸಾರಿ ರಿ " ಅ0ತಾ ಜೊರಾಗಿ ಕೂಗಿ ಹೇಳಿದೆ.
ಇದಾದ ೩ ತಿ0ಗಳ ನ0ತರ...
ಲಿಫ್ಟಗಾಗಿ ಬೆಳಗ್ಗೆ ೫ ಗೆ ಕಾಯ್ತಾ ಇದ್ದೆ.
ಆಕಡೆಯಿ0ದ "ಬನ್ನಿ ನಾನು ನಿಮಗೆ ಲಿಫ್ಟ ಕೊಡ್ತೀನಿ" ಅ0ತಾ ಹುಡುಗಿ ಧ್ವನಿ ಕೇಳಿಸಿತು. ಆಶ್ಚರ್ಯ ಅ0ದ್ರೆ ಅವಳು ೩ ತಿ0ಗಳ ಹಿ0ದೆ ನನಗೆ ಬೈದ ಹುಡುಗಿ!
ನಾನು " ರಿ ಸಾರಿ ರಿ ಅವತ್ತು ನೀವು ಹುಡುಗಿ ಅ0ತಾ ತಿಳಿಯದೆ ಹಾಗೆ...." ಅದಕ್ಕೆ ಅವಳು " ಇರಲಿ, ಇಗ ಬನ್ನಿ ಸ್ವಲ್ಪ ಬೇಗನೆ ಹೋಗಬೇಕು"
ನಾನು ಗಾಡಿ ಹತ್ತಿ ಕುಳಿತೆ.
ನಾನೆ ಮಾತು ಶುರು ಮಾಡಿದೆ. "ರಿ , ನಿಮಗೆ ಭಯಾ ಅಗಲ್ವಾ , ನನ್ನ0ಥ ...
|  | | ಅಭಿಪ್ರಾಯ (13) |
ಮುಂದೆ ಓದಿ... |
|
|
|
|
|
|
| ಮನೋಮೂರ್ತಿ ಈಗ ಸ್ತಾರ್! | ಚಿತ್ರ ವಿಮರ್ಶೆ ಸಿನೆ ಬಿಟ್ಸ್ | ರು. ಶಿ. ಸಮಯ1/5/2008 12:04 AM | |
| ಸಂಗೀತ ನಿರ್ದೇಶಕ ಮನೋಮೂರ್ತಿಯವರನ್ನು ಈ ವರ್ಷದ 'ಸ್ಟಾರ್' ಎನ್ನಬಹುದು. ಅವರು ಸಂಗೀತ ನೀಡಿದ ಎಲ್ಲಾ ಚಿತ್ರಗಳೂ ಯಶಸ್ವಿಯಾಗಿವೆ. 'ಮುಂಗಾರು ಮಳೆ', 'ಮಿಲನ', 'ಚೆಲುವಿನ ಚಿತ್ತಾರ', 'ಗೆಳೆಯ'.......ಹೀಗೆ ಸಾಗುತ್ತದೆ ಅವರ ಯಶಸ್ಸು. ಬೆಂಗಳೂರಿನ ಯು.ವಿ.ಸಿ.ಇ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ, ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಮನೋಮೂರ್ತಿಯವರು ಈಗ ಅಲ್ಲಿನ ಕೆಲಸಕ್ಕೆ ರಾಜಿನಾಮೆಕೊಟ್ಟು ಫುಲ್ ಟೈಮ್ ಸಂಗೀತ ನಿರ್ದೇಶನಕ್ಕಿಳಿದಿದ್ದಾರೆ. ಅವರ ಕೈಯಲ್ಲಿ ಈಗ ಏನಿಲ್ಲವೆಂದರೂ 20 ಕನ್ನಡ ಚಿತ್ರಗಳಿವೆ. ಅವರ ಗೆಲುವು ಹೀಗೇ ಸಾಗಲಿ ಎಂದು ಹಾರೈಸೋಣ.
|  | | ಅಭಿಪ್ರಾಯ (4) |
ಮುಂದೆ ಓದಿ... |
|
| ಸಿನಿಮಾ ನೂರು......ಥಿಯೇಟರ್ ಕೊಡುವವರಾರು........? | ಚಿತ್ರ ವಿಮರ್ಶೆ ಸಿನೆ ಬಿಟ್ಸ್ | ರು. ಶಿ. ಸಮಯ1/2/2008 5:32 AM | |
| 'ಮುಂಗಾರು ಮಳೆ' ಹಾಗು 'ದುನಿಯಾ' ಚಿತ್ರಗಳ ಗೆಲುವು ಕನ್ನಡ ಚಿತ್ರಗಳ ನಿರ್ಮಾಪಕರ ಸಂಖ್ಯೆವನ್ನೂ ಹೆಚ್ಚಿಸಿದೆ. ಮೆಜೆಸ್ಟಿಕ್ ನಲ್ಲಿರುವ ಬೆರೆಳೆಣಿಕೆಯಷ್ಟು ಚಿತ್ರಮಂದಿರಗಳಿಗಾಗಿ ಬೆಟ್ಟದಷ್ಟು ಸಿನಿಮಾಗಳು ಕಾದು ಕುಳಿತಿವೆ. ದರ್ಶನ್ ಅಭಿನಯದ 'ಗಜ' ರೆಡಿಯಾಗಿ ಎರಡು..ಮೂರು ತಿಂಗಳುಗಳೇ ಆಗಿವೆ. 'ಗಾಳಿಪಟ' ಇದೇ ತಿಂಗಳು ತೆರೆ ಕಾಣಬೇಕಿತ್ತು. ಸೂರಿ ನಿರ್ದೇಶನದ 'ಇಂತಿ ನಿನ್ನ ಪ್ರೀತಿಯ' ಸಹ ಶೂಟಿಂಗ್ ಮುಗಿಸಿದೆ. 'ಹೊಂಗನಸು' ಸಹ ರಿಲೀಸ್ ಗೆ ರೆಡಿಯಾಗಿದೆಯಂತೆ. ಸುದೀಪ್ ಅಭಿನಯದ 'ಗೂಳಿ' ಸಹ ಸಿದ್ಧವಾಗಿದೆ. 'ಗಂಗೇ ಬಾರೆ, ತುಂಗೇ ಬಾರೆ' ಯ ಡಬ್ಬಿಂಗ್ ಕೆಲಸ ಸಾಗುತ್ತಿದೆ. 'ಮೊಗ್ಗಿನ ಮನಸ್ಸು' ಚಿತ್ರ ಸಹ ಚಿತ್ರಮಂದಿರಕ್ಕೆ ಎದುರು ನೋಡುತ್ತಿದೆ. ಅಂತೂ 'ಮಳೆ' ಕನ್ನಡ ಚಿತ್ರರಂಗದ 'ದುನಿಯಾ'ದಲ್ಲಿ ಈ ಬಗೆಯ ಬರಗಾಲ ತಂದಿದೆ.
|  | | ಅಭಿಪ್ರಾಯ (2) |
ಮುಂದೆ ಓದಿ... |
|
| ಕ್ಷಮೆ ಇರಲಿ | ಚಿತ್ರ ವಿಮರ್ಶೆ ಸಿನೆ ಬಿಟ್ಸ್ | ರು. ಶಿ. ಸಮಯ1/2/2008 5:18 AM | |
| "ಗೊತ್ತಾಗದೆ ಎರಡು ಕೆಟ್ಟ ಚಿತ್ರಗಳಲ್ಲಿ ಅಭಿನಯಿಸಿದೆ. ಇನ್ನು ಮುಂದೆ ಹೀಗೆ ಮಾಡುವುದಿಲ್ಲ. ಎಚ್ಚರಿಕೆಯಿಂದ ಪಾತ್ರಗಳನ್ನು ಆಯ್ದುಕೊಳ್ಳುತ್ತೇನೆ" ಹೀಗೆಂದು ಎಲ್ಲಾ ಪತ್ರಿಕೆಗಳಲ್ಲೂ ಜಾಹೀರಾತು ಕೊಟ್ಟವರು "ನೆನಪಿರಲಿ" ಚಿತ್ರದ ನಾಯಕ "ಪ್ರೇಮ್". "ಪ್ರಾಣ" ಎನ್ನುವ ಡಬ್ಬಾ ಸಿನಿಮಾದಲ್ಲಿ ನಟಿಸಿದ್ದ ಈ ನಟನಿಗೆ, ಚಿತ್ರರಂಗದಲ್ಲಿ ಪ್ರಾಣ ನೀಡಿದವರು ನಿರ್ದೇಶಕ ರತ್ನಜ ಹಾಗು ಸಂಗೀತ ನಿರ್ದೇಶಕರಾದ ಹಂಸಲೇಖ. ಆದರೆ ಇತ್ತೀಚಿಗಿನ ಪ್ರೇಮ್ ರ ಎಲ್ಲಾ ಸಿನಿಮಾಗಳು ನೆಲಕಚ್ಛುತ್ತಿವೆ. 'ಸವಿನೆನಪು', 'ಗುಣವಂತ', 'ಪಲ್ಲಕ್ಕಿ'.......ಒಂದರಮೇಲೊಂದು ಫ್ಲಾಪ್ ಸಿನಿಮಾಗಳು.
ಅದಕ್ಕಾಗಿ ಅವರು ಕ್ಷಮೆ ಕೇಳಿದ್ದಾರೆ.
ಅಂದಹಾಗೆ ಪ್ರೇಮ್ ರ ಮುಂದಿನ ಚಿತ್ರ ರತ್ನಜ ನಿರ್ದೇಶನದ 'ಹೊಂಗನಸು'.
ಮತ್ತೊಮ್ಮೆ ಪ್ರೇಮ್ ರ ಪ್ರಾಣ ಕೊಡಲು ಅವರೇ ಬರಬೇಕೇನೋ!
|  | | ಅಭಿಪ್ರಾಯ (1) |
ಮುಂದೆ ಓದಿ... |
|